Wednesday, 1 July 2020

ಯುದ್ಧ ಧರ್ಮ

ಭಾರತದಲ್ಲಿ ಹಿಂದಿನ ರಾಜರು ಹೇಗೆ ಧರ್ಮಕ್ಕಾಗಿ, ಜನರ ಕ್ಷೇಮವನ್ನೇ ಮುಖ್ಯ ಕಾರಣವನ್ನಾಗಿ ಇಟ್ಟು ಕೊಂಡು ಯುದ್ಧಗಳನ್ನು ಮಾಡುತ್ತಿದ್ದರು ಎಂಬುದನ್ನು ನೋಡಿದರೆ ಆಧುನಿಕರಿಗಿಂತ ಹೆಚ್ಚು ಪ್ರಾಚೀನ ಭಾರತೀಯರೇ ಮಾನವಿಕ ಮೌಲ್ಯಗಳನ್ನು ಹೊಂದಿದ್ದರೆಂದು ಹೇಳಬಹುದು. ಒಂದು ಸಾವಿರ ವರ್ಷದ ಹಿಂದೆ ಭಾರತ ಇತರ ದಾಳಿಗಳ ಮುಂದೆ ಸೋತ್ತಿದ್ದೂ ಸಹ ಧರ್ಮದ ಯುದ್ಧ ಮಾಡಿದ್ದರಿಂದಲೇ. ಧರ್ಮ ಯುದ್ಧದಲ್ಲಿ ಎಂದೂ ಇತರ ಜನಾಂಗಗಳ ನಾಶ ಇರಲಿಲ್ಲ. ಮತ್ತೊಮ್ಮೆ ಧರ್ಮಯುದ್ಧದ ನಿಯಮಗಳನ್ನು ವಿವರವಾಗಿ ಬರೆಯುತ್ತೇನೆ ಅಥವಾ ಮಹಾಭಾರತ ಓದಿದರೆ ತಿಳಿಯುತ್ತದೆ.
ಚೈನಾದಂತಹ ರಾಷ್ಟ್ರಗಳು ಇಂದು ಭಾರತದ ಮೇಲೆ ಕಾಲು ಕೆರೆದು ಯುದ್ಧಕ್ಕೆ ನಿಂತಿರುವ ಈ ಸಮಯದಲ್ಲಿ ಸಾವಿರ ವರ್ಷದ ಹಿಂದೆ ಭಾರತದ ರಾಜರು ಬರೆದ ಧರ್ಮಯುದ್ಧದ ಸಾಲು ನನ್ನ ಮನಸ್ಸನ್ನು ಉತ್ಸಾಹದಾಯಕವನ್ನಾಗಿ  ಮಾಡಿತು. ಕಲ್ಯಾಣ ಚಾಲುಕ್ಯರ ದೊರೆಯಾದ ಚಾಲುಕ್ಯ ಚಕ್ರವರ್ತಿ ಮೂರನೇ ಸೋಮೇಶ್ವರ ( ಸಾ. ೧೧೨೭ - ೧೧೩೯ ) ತನ್ನ  ಗ್ರಂಥವಾದ ಮಾನಸೋಲ್ಲಾಸ ಅಥವಾ ಅಭಿಲಾಷಿತಾರ್ಥ ಚಿಂತಾಮಣಿ ಯಲ್ಲಿ ಯುದ್ಧ ಸಿದ್ಧತೆಗಳ ಬಗ್ಗೆ ಮಾತನಾಡುವಾಗ ದ್ವಿತೀಯ ವಿಂಶತಿಯ, ೧೪ನೇ ಅಧ್ಯಾಯದಲ್ಲಿ ೯೨೮ ಶ್ಲೋಕದಲ್ಲಿ ಹೀಗೆ ಅಭಿಪ್ರಾಯ ಪಡುತ್ತಾನೆ.

''ಮಳೆ ಬಾರದೆ ನೀರಿಲ್ಲದಂಥ, ದುರ್ಭಿಕ್ಷದಲ್ಲಿರುವಂಥ, ಸಾಂಕ್ರಾಮಿಕ ರೋಗಗಳು ಹಬ್ಬಿದಂಥ, ದುಸ್ಥಿತಿಯಲ್ಲಿರುವಂಥ ವೈರಿದೇಶದ ಮೇಲೆ ದಾಳಿ ಮಾಡಬಾರದು''.

ಇಂತಹ ಸಮಯದಲ್ಲಿ ಭಾರತದ ಚರಿತ್ರೆ, ಔದಾರ್ಯ ಹಿಂದಿನ ಪರಕೀಯರ ದಾಳಿಗಳು, ಪರಕೀಯರ ಅನಾರ್ಯತೆ ಮತ್ತು ಚೈನಾದ ಅಯೋಗ್ಯತೆಗಳು ಮನಸ್ಸಿನಲ್ಲಿ ಓಡಿತು.
ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ

#ಶಲ್ವಾಧೀಕ್ಷಣ

ಡಾ.‌ ಶಲ್ವಪ್ಪಿಳ್ಳೈ ಅಯ್ಯಂಗಾರ್

Tuesday, 2 April 2019

ಡಾಕ್ಟರ್ ಜಿ ಅವರ ಅಮೃತವಚನಗಳು


ಸರ್ವಪ್ರಯತ್ನದಿಂದ ತನ್ನ ದುರ್ಬಲತೆಯನ್ನು ತೊಡೆದುಹಾಕಿ ಬಲಿಷ್ಠವಾಗುವುದೇ ದುರ್ಬಲ ಸಮಾಜವೊಂದರ ಅತಿ ಶ್ರೇಷ್ಠ ಕರ್ತವ್ಯ.
- ಪರಮ ಪೂಜನೀಯ ಡಾಕ್ಟರ್‌ಜಿ

ಕಾರ್ಯವೊಂದರ ಗುರಿಯು ಶ್ರೇಷ್ಠವಾಗಿದ್ದರಷ್ಟೇ ಸಾಲದು. ಅದನ್ನು ಸಾಧಿಸಹೊರಡುವವರಲ್ಲಿ ಬಲಿಷ್ಠ ಹೃದಯಗಳೂ ಬಲವಾದ ತೋಳುಗಳೂ ಬೇಕು
- ಪರಮ ಪೂಜನೀಯ ಡಾಕ್ಟರ್‌ಜಿ

ಯಾವನು ತಾನು ಸ್ವೀಕರಿಸಿದ ತತ್ವದ ದಿಕ್ಕಿನಲ್ಲೇ ತನ್ನ ಬದುಕಿನ ಪ್ರತಿಯೊದು ಹೆಜ್ಜೆಯನ್ನು ಹಾಕುತ್ತಾನೋ, ಅಂಥವನೇ ವಂದನೆಗೆ, ಅನುಕರಣೆಗೆ ಯೋಗ್ಯ.
- ಪರಮ ಪೂಜನೀಯ ಡಾಕ್ಟರ್‌ಜಿ

ಜಗತ್ತಿನಲ್ಲಿ ಸಂಘಟನೆಯಿಂದಲೇ ಶಕ್ತಿ. ಅದರ ಬಲದ ಮೇಲೆ ಎಲ್ಲ ಸಮಸ್ಯೆಗಳನ್ನೂ ಪರಿಹರಿಸಬಹುದು. ಇದು ನನ್ನ ದೃಢವಾದ ನಂಬಿಕೆ.
- ಪರಮ ಪೂಜನೀಯ ಡಾಕ್ಟರ್‌ಜಿ

ಒಣಹೊರಟೆ ಅಥವಾ ಕೃತಿಶೂನ್ಯ ಸಿದ್ಧಾಂತಗಳಿಂದ ಈವರೆಗೆ ಯಾವ ಮಹತ್ಕಾರ್ಯವೂ ಆಗಿಲ್ಲ. ಮುಂದೆ ಆಗುವುದೂ ಅಸಂಭವ.
- ಪರಮ ಪೂಜನೀಯ ಡಾಕ್ಟರ್‌ಜಿ

Tuesday, 27 November 2018

ವರ್ಣದಿಂದ ವರ್ಣಕ್ಕೆ ಹೋದ ಮಹರ್ಷಿಗಳು

ಕೌಶಿಕ ರಾಜನಾಗಿದ್ದ, ಕ್ಷತ್ರಿಯ. ಆದರೂ ವಿಶ್ವಾಮಿತ್ರನಾದ. ನಾವು ಅವನನ್ನು ಮಹಾ ಬ್ರಾಹ್ಮಣ ಅಂತ ಒಪ್ಪಿಕೊಂಡಿದ್ದೇವೆ, ವಿಶ್ವಾಮಿತ್ರನ ಹೆಸರಲ್ಲಿ ಗೋತ್ರವಿದೆ. ನಮಗೇನು ಸಮಸ್ಯೆ ಅನಿಸಿಲ್ಲ.

ವಾಲ್ಮೀಕಿ ಬೇಡ ಜನಾಂಗದಲ್ಲಿ ಹುಟ್ಟಿದ್ದು. ನಾರದರ ಪ್ರಚೋದನೆಯಿಂದ  ಬ್ರಾಹ್ಮಣನಾದ, ನಮಗೇನು ಸಮಸ್ಯೆ ಅನಿಸಿಲ್ಲ.

ವ್ಯಾಸ ದೋಣಿ ನಡೆಸುವ ಹೆಂಗಸಿನ ಮಗ, ಆದರೂ ವ್ಯಾಸಪೂರ್ಣಿಮೆಯದಿನವೇ ನಮ್ಮ ಎಲ್ಲಾ ಸನ್ಯಾಸಿಗಳು ಚಾತುರ್ಮಾಸ್ಯಕ್ಕೆ ಕೂರೋದು. ಜೈನಮುನಿಗಳು ಕೂಡಾ ವ್ಯಾಸಪೂರ್ಣಿಮೆಯದಿನವೇ ಚಾತುರ್ಮಾಸ್ಯಕ್ಕೆ ಕೂರೋದು.

Wednesday, 3 October 2018

ಸರ್ಪ ಮತ್ತು ಮಿಂಚು ಹುಳು

ಒಂದಾನೊಂದು ಕಾಲದಲ್ಲಿ ಒಂದು ಸರ್ಪವು ಮಿಂಚುಹುಳುವೊಂದನ್ನು ತಿನ್ನಲಿಕ್ಕೆ ಹವಣಿಸುತ್ತಿತ್ತು. ಭಯಭೀತ ಮಿಂಚುಹುಳು ಸರ್ಪದಿಂದ ತಪ್ಪಿಸಿಕೊಳ್ಳಲಿಕ್ಕೆ ಅತ್ತಿಂದಿತ್ತ ಹಾರುತ್ತಿತ್ತು. ಸರ್ಪವು ಬೆಂಬಿಡದೆ ಅದನ್ನು ಹಿಂಬಾಲಿಸುತ್ತಿತ್ತು.  ಒಂದೆರಡು ದಿನಗಳ ನಿರಂತರ ಹಾರಾಟದ ನಂತರ ಮಿಂಚುಹುಳು ದಣಿಯಿತು. ಅದು ಸರ್ಪವನ್ನು ಕೇಳಿತು, ನಾನು ನಿನಗೆ ಮೂರು ಪ್ರಶ್ನೆ ಕೇಳಲೇ ಎಂದು. ಸರ್ಪವು ಸಿಟ್ಟಿನಿಂದಲೇ ‘ಸರಿ ಸರಿ. ಯಾರಿಗೂ ಉತ್ತರಿಸುವ ಅಗತ್ಯ ನನಗಿಲ್ಲ, ನಿನ್ನನ್ನು ಹೇಗೂ ತಿಂದು ಮುಗಿಸುವವನೇ. ಪ್ರಶ್ನೆ ಕೇಳು ಪರವಾಇಲ್ಲ’ ಎಂದಿತು. ಮಿಂಚುಹುಳು ಮೊದಲ ಪ್ರಶ್ನೆಯಾಗಿ ‘ನಾನು ನಿನ್ನ ಆಹಾರಸರಪಳಿಯಲ್ಲಿ ಇದ್ದೇನೆಯೇ?’ ಎಂದು ಕೇಳಿತು. ಇಲ್ಲವೆಂದಿತು ಸರ್ಪ. ‘ನಾನು ನಿನಗೇನಾದರೂ ತೊಂದರೆ ಮಾಡಿದೆನೇ ಅಥವಾ ಕೆಣಕಿದೆನೇ?’ ಮಿಂಚುಹುಳುವಿನ ಎರಡನೆಯ ಪ್ರಶ್ನೆ. ಇಲ್ಲ ಎಂದುತ್ತರಿಸಿತು ಸರ್ಪ. ‘ಮತ್ತೇಕೆ ನನ್ನನ್ನು ಕೊಂದು ತಿನ್ನಬೇಕೆಂದಿದ್ದೀ?’ ಮೂರನೆಯ ಪ್ರಶ್ನೆ ಕೇಳಿತು ಮಿಂಚುಹುಳು. ಆಗ ಸರ್ಪ ಹೇಳಿತು: ‘ಏಕೆಂದರೆ ನೀನು ಆ ರೀತಿ ಮಿನುಗುವುದನ್ನು ನೋಡಿ ನನ್ನಿಂದ ಸಹಿಸಲಾಗುತ್ತಿಲ್ಲ.’

ನಮ್ಮ ಬದುಕಿನಲ್ಲಿಯೂ ನಮಗೆ ಇಂಥ ಸರ್ಪಗಳು ಎದುರಾಗುತ್ತವೆ. ನಮ್ಮ ಬಾಳಿನ ಹೊಳಪನ್ನು ಕಂಡು ಹೊಟ್ಟೆಯುರಿಯುವ, ನಾಶ ಮಾಡಲೆತ್ನಿಸುವ ವಿಷಸರ್ಪಗಳು. ಅವುಗಳನ್ನು ಎದುರಿಸಲಿಕ್ಕೆ ನಮಗೆ ಎರಡು ಆಯ್ಕೆಗಳಿರುತ್ತವೆ. ಒಂದೋ ನಮ್ಮ ಹೊಳಪನ್ನು ನಿಲ್ಲಿಸಿಬಿಡುವುದು, ಆಗ ಯಾವ ಸರ್ಪವೂ ನಮ್ಮ ಬೆನ್ನಟ್ಟುವುದಿಲ್ಲ. ಎರಡನೆಯ ಆಯ್ಕೆಯೆಂದರೆ ನಮ್ಮ ಹೊಳಪನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವುದು ಮತ್ತು ಆ ಹೊಳಪಿನಿಂದಲೇ ಸರ್ಪಗಳನ್ನು ಮಣಿಸುವುದು.

ಪ್ರತಿಯೊಬ್ಬರ ಜೀವನದ ಸಾಗಿಬರುವ ಹಾದಿಯಲ್ಲಿ ಕಲ್ಲುಮುಳ್ಳು ಸಾಮಾನ್ಯ ಮೆಟ್ಟಿನಿಂತು ಮುಂದೆ ಸಾಗೋಣ.

ಕೃಪೆ ವಾಟ್ಸಪ್

Monday, 5 February 2018

ಶಾಖೆಯ ಬಗೆಗಿನ ಗುರೂಜಿಯವರ ಮಾತುಗಳು ಹೀಗಿವೆ..


ಶಾಖೆ - ಇಪ್ಪತ್ತನಾಲ್ಕು ಘಂಟೆಗಳಲ್ಲಿ ನಾವು ಮಾಡುವ ಸಂಘಕಾರ್ಯದ ಲೆಕ್ಕಪತ್ರ ಇಡುವ ಜಾಗ ಅದು. ಸ್ವಲ್ಪ ಶಿಸ್ತನ್ನು ಕಲಿಯುವ, ಮತ್ತು ಮತ್ತೊಬ್ಬರಿಗೆ ಹೆಗಲು ತಾಗಿಸಿ ಆಟವಾಡುವ, ವ್ಯಾಯಾಮ ಮಾಡುವುದರಿಂದ ಸಂಪೂರ್ಣ ಸಾಜದ ಸಂಬಂಧವಾಗಿ ಅಂತಃಕರಣದಲ್ಲಿ ನಿರ್ಮಾಣವಾಗುವ ಏಕತೆಯ ಮಾನಸಿಕ ಪಡೆಯುವ ಸ್ಥಾನವಾಗಿದೆ. ಇಲ್ಲಿ ಪ್ರತಿದಿನ ಪ್ರಾರ್ಥನೆ ಮತ್ತು ಧ್ವಜದ ದರ್ಶನದ ರೂಪದಲ್ಲಿ ನಮ್ಮ ಧ್ಯೇಯದ ಸ್ಮರಣೆಮಾಡುವ ಅವಕಾಶ ಸಿಗುತ್ತದೆ.

ಈ ಪ್ರತಿದಿನದ ಶಾಖೆಯಲ್ಲಿ ರಾಷ್ಟ್ರವನ್ನು ಶ್ರೇಷ್ಠಗೊಳಿಸುವ ನಿಶ್ಚಯವನ್ನು ಪ್ರಖರಗೊಳಿಸಲಾಗುತ್ತದೆ. ಪರಂವೈಭನ್ನೇತುಮೇತತ್ಸ್ವರಾಷ್ಟ್ರಮ್ ಎಂದು ಹೇಳಿ ಈ ರಾಷ್ಟ್ರವನ್ನು ಅತ್ಯಂತ ವೈಭವ ಸಂಪನ್ನವಾಗಿ ಮಾಡುವ ನಿರ್ಧಾರವನ್ನು ಪುನರುಚ್ಚಲಿಸಲಾಗುತ್ತದೆ. ನಮ್ಮ ದೃಷ್ಟಿಯಲ್ಲಿ ರಾಷ್ಟ್ರದ ವೈಭವದ ಅರ್ಥ ಕೇವಲ ಸ್ವಲ್ಪ ಹಣ, ಅಧಿಕಾರ ಮೊದಲಾದವುಗಳಲ್ಲಿ ಸಂತೋಷಪಡುವುದಷ್ಟೇ ಅಲ್ಲ. ನಮ್ಮ ರಾಷ್ಟ್ರೀಯ ದೃಷ್ಟಿಕೋನದಂತೆ , ಸಂಪತ್ತು ಪ್ರಗತಿ  ಧರ್ಮಾನುಕೂಲ ಮತ್ತು ಧರ್ಮರಕ್ಷಾರ್ಥವಾಗಿ ಇದ್ದಾಗ ಮಾತ್ರವೇ  ಸಂತೋಷವೆಂದು ಹೇಳಲಾಗುತ್ತದೆ.

ವಿಷಯ ಸಂಗ್ರಹ : ಶ್ರೀ ಗುರೂಜಿ ಸಮಗ್ರ, ಸಂಪುಟ ೨, ಪುಟ ೨೬೬.

Thursday, 1 February 2018

ರಾಷ್ಟ್ರಪುರುಷ ಶ್ರೀ ಗುರೂಜಿ

ಡಾಕ್ಟರ್ ಜೀ ಸ್ವರ್ಗಸ್ಥರಾಗಿದ್ದು ೧೯೪೦ ಜೂನ್ ೨೧ ರಂದು. ಆನಂತರ ಸತತ ೩೩ ವರುಷಗಳ ಕಾಲ ಸಂಘದ ಸರಸಂಘಚಾಲಕರಾಗಿದ್ದವರು ಶ್ರೀ ಗುರೂಜಿಯವರು..

ತಮ್ಮ ೩೩ ವರುಷಗಳ ಸುಧೀರ್ಘ ಅವಧಿಯಲ್ಲಿ ಗುರೂಜಿಯವರು ಎದುರಿಸಿದ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯೆಂದರೆ ಅದು ಗಾಂಧೀಜಿಯವರ ಹತ್ಯೆಯ ನಂತರದ ಎರಡು ವರ್ಷಗಳು. ಬಿಳಿ ಚರ್ಮದ ಜನರಿಂದ ಕಂದು ಬಣ್ಣದ ಬ್ರಿಟೀಷರಿಗೆ ಅಧಿಕಾರ ಹಸ್ತಾಂತರವಾಗಿ ಒಂದೂವರೆ ವರ್ಷವಾಗಿತ್ತಷ್ಟೇ! ಕಲ್ಪನೆಯೇ ಮಾಡಿಕೊಳ್ಳಲಾಗದ ಘಟನೆಯಿಂದ ಗಾಂಧೀಜಿ ಅಸುನೀಗಿದರೆ, ಇತ್ತ ಸಂಘವನ್ನು ಉಸಿರುಗಟ್ಟಿಸಲು ಕೆಲವರು ಸೊಂಟ ಕಟ್ಟಿ ನಿಂತುಬಿಟ್ಟರು.. ಹೊರಗಿನವರ ವಿರೋಧ ಯಾವಗಲೂ ಇದ್ದದ್ದೇ! ಆದರೆ, ಸಂಘದ ಕಾರ್ಯವನ್ನು  ೨೯ ವರುಷ ಮಾಡಿದ ಕೆಲವರಿಗೆ ನಮ್ಮ ಕಾರ್ಯಪದ್ಧತಿಯ ಮೇಲೆ ವಿಶ್ವಾಸ ಕಡಿಮೆಯಾಯಿತು.   ಇಂತಹ ಚಿಂತನೆಗಳು ಬರಲು ಕಾರಣಗಳು ಇಲ್ಲದಿಲ್ಲ. ಸ್ವಾತಂತ್ರ್ಯವೆಂದರೆ ಬರಿಯ ಅಧಿಕಾರ ಹಸ್ತಾಂತರವಲ್ಲ, ಅದು ರಾಷ್ಟ್ರದ ಸಮಗ್ರ ಜನರ ದೃಷ್ಟಿಕೊನವನ್ನು ಬದಲಾಯಿಸುವ ಅಮೃತ ಘಳಿಗೆ.  ಕೆಲವರು ಸ್ವಾತಂತ್ರ್ಯ ಬಂದದ್ದೇ ತಡ, ಎಲ್ಲಿಲ್ಲದ ಖುಷಿಯಿಂದ ಡಂಗೂರ ಬಾರಿಸಿದ್ದೋ ಬಾರಿಸಿದ್ದು ! ಒಂದು ಹನಿ ರಕ್ತವೂ ಚೆಲ್ಲದೆ ಸ್ವಾತಂತ್ರ್ಯ ಪಡೆದೆವೆಂಬ ಹುಂಬ ಮನಸ್ಥಿತಿಯದು!  ಇಡೀ ದೇಶವೇ ಇಂಥ ಮನಸ್ಥಿತಿಯಲ್ಲಿ ತೇಲಾಡುತ್ತಿದ್ದಾಗ, ಸ್ವಯಂಸೇವಕರೂ ಕೊಂಚ ವಿಚಲಿತರಾದಂತೆ ಕಾಣುತ್ತದೆ.

ಇಂಥಹ ಸನ್ನಿವೇಷದಲ್ಲಿ ಸಂಘದ ಸ್ವಯಂಸೇವಕರಿಂದ, ಹಿತೈಷಿಗಳಿಂದ ಮತ್ತು ಸಾರ್ವಜನಿಕರಿಂದ ಹಲವಾರು ಸಲಹೆಗಳು ಬಂದಾಗ ಅದನ್ನು ಗುರೂಜಿಯವರು ಸಮರ್ಥವಾಗಿ ನಿರ್ವಹಿಸಿದ ರೀತಿ ನಿಜಕ್ಕೂ ಅದ್ಭುತ. ಆ ಸಂದರ್ಭದಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆಯಾಗಿದೆ.. ಇಲ್ಲಿ ಅದರ ಸಣ್ಣ  ಸಂಭಾಷಣೆಗಳನ್ನು   ಮಾತ್ರ ದಾಖಲಿಸುತ್ತಿದ್ದೇನೆ.

೧. ಗಾಂಧೀಜಿಯವರ ಹತ್ಯೆಯ ನಂತರ ಕಾಂಗ್ರೆಸ್ನ ಅಂಹಿಸಾವಾದಿಗಳು.. ಸಂಘದ ಸ್ವಯಂಸೇವಕರನ್ನು ಹುಡುಕಿ ಹುಡುಕಿ ಕೊಲ್ಲಲಾರಂಭಿಸಿದರು. ಇದಕ್ಕೆ ಆಳುವ ದೊರೆಗಳ ಅಭಯಹಸ್ತವಿದ್ದದ್ದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಹಜವಾಗಿಯೇ ಸ್ವಯಂಸೇವಕರು ಪ್ರತೀಕಾರದ ಮಾತುಗಳನ್ನಾಡಿದರು ಮತ್ತು ಅಂಹಿಂಸಾವದಿಗಳ ಹಿಂಸೆಗೆ ತಕ್ಕ ಪ್ರತ್ಯುತ್ತರ ನೀಡಲು ಗುರೂಜಿಯವರ ಅನುಮತಿ ಕೇಳಿದರು. ಆಗ ಬಂಧನದಲ್ಲಿದ್ದ ಗುರೂಜಿಯವರು ಹೇಳಿದ್ದು ಒಂದೇ ಮಾತು. "Be Calm at all Costs" ! ಇದೊಂದೇ ಮಾತಿಗೆ ಸ್ವಯಂಸೇವಕರು ತಡೆದು ನಿಂತರು. ತಪ್ಪು ಮಾಡಿದರೂ ಅವರು ನಮ್ಮದೇ ಸಮಾಜದ ಬಂದುಗಳು, "ಹಿಂಸೆಗೆ ಹಿಂಸೆಯೇ ಉತ್ತರವಲ್ಲ" ಎಂಬ ಗಾಂಧೀಜಿಯವರ ಮಾತನ್ನು ಅಕ್ಷರಶಃ ಗುರೂಜಿಯವರು ಪಾಲಿಸಿ ತೋರಿಸಿದರು.

೨. ಸ್ವಾತಂತ್ರ್ಯ ಬಂದ ಮೇಲೆ ಹಲವರಿಗೆ ಇನ್ನು ಸಂಘದ  ಅವಶ್ಯಕತೆಯಿಲ್ಲವೆಂದು ಅನಿಸಿದ್ದು ಸಹಜ. ಅದನ್ನು ಹಲವಾರು ಜನ ವ್ಯಕ್ತಪಡಿಸಿದರು ಕೂಡ.

ಗುರೂಜಿಯವರ ಸಮಾಧಾನ : ನಮ್ಮ ಕಾರ್ಯಪದ್ದತಿಯು ಸ್ವಾತಂತ್ರ್ಯಕ್ಕಾಗಿ ಮಾತ್ರವಲ್ಲ, ಬದಲಾಗಿ ಈ ಪ್ರಾಚೀನ ಸಂಸ್ಕೃತಿಯ ಪುನರುತ್ಥಾನಕ್ಕಾಗಿ. ಸ್ವಾತಂತ್ರ್ಯ ಬಂದೊಡನೆ, ಬಡತನ, ಅನಕ್ಷರತೆ, ಆತ್ಮವಿಸ್ಮೃತಿಯೆಲ್ಲಾ ಮಾಯವಾಗುವುದಿಲ್ಲ. ಅದು ಶೀಘ್ರವಾಗಿ ಆಗುವ ಕೆಲಸವೂ ಅಲ್ಲ. ಬಂದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಅವಶ್ಯಕತೆಯೂ ಅಷ್ಟೇ ಇದೆ. ಹಾಗಾಗಿ ವ್ಯಕ್ತಿ ನಿರ್ಮಾಣದ ಕಾರ್ಯ ನಿರಂತರ ನಡೆಯಲೇಬೇಕು.

೩. ಸಂಘವು ದೈನಂದಿನ ಶಾಖೆಗಳನ್ನು ಬಿಟ್ಟು ರಾಜಕೀಯವಾಗಿ ಕೆಲಸ ಮಾಡಬೇಕು. ಸ್ವಯಂಸೇವಕರು ರಾಜನೈತಿಕ ಕ್ಷೇ‌ತ್ರದಲ್ಲಿ‌ ಅತ್ಯುನ್ನತ ಪ್ರಗತಿ ಸಾಧಿಸಬಲ್ಲರು. ಸ್ವಯ‌ಂಸೇ‌ವಕರಿಗಲ್ಲದೆ‌ ಈ ಸಾಮರ್ಥ್ಯ ಬೇರಾರಿಗಿದೆ ? ಇಪ್ಪತೆಂಟು ವರುಷಗಳು ದುಡಿದ ಮೇಲೆ ನಾವು ಯಾಕೆ ಅಧಿಕಾರ ಗ್ರಹಣ ಮಾಡಬಾರದು?

ಗುರೂಜಿಯವರ ಸಮಾಧಾನ : ಆಳುವ ವ್ಯಕ್ತಿಗಳು ನಮ್ಮ ಕಾರ್ಯಕ್ಕೆ ಅಡ್ಡಿಯುಂಟು ಮಾಡುವರೆಂಬ ಕಾರಣಕ್ಕೆ ನಾವು ರಾಜನೈತಿಕೆ ಕೆಲಸಕ್ಕಿಳಿದರೆ ಸಂಘದ ಉದ್ದೇಶ ಸಫಲವಾಗುವುದಿಲ್ಲ. ಈಗ ನಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಗತಿಗೆ ಆಸ್ಪದವಿಲ್ಲವೆಂದೂ ಅನ್ನಿಸಬಹುದು. ಆದ್ದರಿಂದ ಬೀಗ ಜಡಿದು ನಮ್ಮ ಕಾರ್ಯ ನಿಲ್ಲಿಸಿಬಿಡೋಣವೇ ?

೧೯೪೮ರ ಪರಿಸ್ಥಿತಿಯಲ್ಲಿ ಇಂತಹ ಭಾವನೆಗಳ ಮೇಲಾಟದಲ್ಲಿ ಸಂಘವನ್ನು ರಕ್ಷಿಸಿದ ಅವರು ನಿಜವಾಗಿ ಒಬ್ಬ ಅಸಾಧಾರಣ ನೇತಾರ.

ವಿಷಯ ಸಂಗ್ರಹ : ಶ್ರೀ ಗುರೂಜಿ ಸಮಗ್ರ, ಸಂಪುಟ ೨.

Friday, 17 November 2017

ಶಿವಾಜಿ ಮಹಾರಾಜ

ಮರಾಠರು
ಮರಾಠ ಮನೆತನ
._______________________________________
1. ಶಿವಾಜಿ ಯಾವಾಗ ಜನಿಸಿದನು?
*1627 ಎಪ್ರಿಲ್20*
___________________________________
2. ಶಿವಾಜಿ ಹುಟ್ಟಿದ ಊರು ಯಾವುದು?
*ಶಿವನೇರಿ ದುರ್ಗ.(ಪುಣೆ ಹತ್ತಿರ)*
___________________________________
3. ಶಿವಾಜಿ ತಂದೆ ತಾಯಿ ಯಾರು?
*ತಂದೆ ಷಹಜಿ ಬೋಸ್ಲೆ ತಾಯಿ ಜೀಜಾಬಾಯಿ*
___________________________________
4. ಶಿವಾಜಿ ಯ ಆಧ್ಯಾತ್ಮಿಕ ಗುರು ಯಾರು?
*ಭಗವಾನ್ ರಾಮದಾಸ್*
___________________________________
5. ಶಿವಾಜಿಯ ಜೀವನದ ಗುರು ಯಾರು?
*ದಾದಾಜಿ ಕೊಂಡ ದೇವ*
___________________________________
6. ಶಿವಾಜಿಗೆ ಉತ್ತಮ ನೈತಿಕ ಪಾಠಗಳನ್ನು ಹೇಳುವುದರ ಮೂಲಕ ಒಬ್ಬ ಪ್ರಬಲ ನಾಯಕನಾಗಿ ಮಾಡಿದವರು ಯಾರು?
*ತಾಯಿ ಜೀಜಾಬಾಯಿ , ಗುರು ದಾದಾಜಿಕೊಂಡದೇವ*
___________________________________
7. ಯಾವ ಸೇನಾಧಿಪತಿಯನ್ನು ವ್ಯಾಘ್ರನಖ ದಿಂದ ಶಿವಾಜಿ ಕೊಂದನು?
*ಅಫ್ಜಲ್ ಖಾನ್*
___________________________________
8. ಶಿವಾಜಿ ಯಾವ ಯುದ್ಧದಲ್ಲಿ ಪರಿಣಿತಿ ಹೊಂದಿದನು?
*ಗೆರಲ್ಲಾ*
___________________________________
9. 1663 ರಲ್ಲಿ ಯಾವ ಔರಂಗಜೇಬ್ ನ ಸೇನಾಪತಿಯನ್ನು ಶಿವಾಜಿ ಸೋಲಿಸಿದನು?
*ಷಾಹಿಸ್ತಾ ಖಾನ್*
___________________________________
10. ಶಿವಾಜಿ 1665 ರಲ್ಲಿ ಔರಂಗಜೇಬ್ ನ ಯಾವ ಸೇನಾಧಿಪತಿಯಿಂದ ಸೋತನು?
*ಜೈಸಿಂಗ್*
___________________________________
11. ಔರಂಗಜೇಬ್ ಮತ್ತು ಶಿವಾಜಿ ಯು 1665 ರಲ್ಲಿ ಯಾವ ಒಪ್ಪಂದ ಮಾಡಿಕೊಂಡರು?
*ಪುರಂದರ ಒಪ್ಪಂದ*
___________________________________
12. ಔರಂಗಜೇಬ್ ನು ಶಿವಾಜಿಯನ್ನು ಯಾವ ಬಂಧಿಖಾನೆಯಲ್ಲಿ ಬಂಧಿಸಿ ಇಟ್ಟಿದನು?
*ಅಗ್ತಾ*
___________________________________
13. ಶಿವಾಜಿ ಪಟ್ಟಾಭಿಷೇಕ ಎಲ್ಲಿ ನಡೆಯಿತು?
*ರಾಯಗಡ*
___________________________________
14. ಶಿವಾಜಿ ಪಟ್ಟಾಭಿಷೇಕ ವಾದ ವರ್ಷ?
*1674 ಜೂನ್ 16*
___________________________________
15. ಶಿವಾಜಿ ಯು ಮೈಸೂರು ಸಂಸ್ಥಾನದ ಮೇಲೆ ದಾಳಿ ಮಾಡಿದ ವರ್ಷ?
*1677 ರಲ್ಲಿ ಚಿಕ್ಕದೇವರಾಯರಿಂದ ಸೋತನು*
___________________________________
16. ಶಿವಾಜಿ ಯಾವಾಗ ಮರಣ ಹೊಂದಿದನು?
*1680 ಏಪ್ರಿಲ್ 14*
___________________________________
17. ಶಿವಾಜಿ ಸಮಾಧಿ ಎಲ್ಲಿದೆ?
*ರಾಯಗಡ*
___________________________________
18. ಶಿವಾಜಿ ಮಂತ್ರಿ‌ಮಂಡಲವನ್ನು ಎನೇಂದು ಕರೆಯುತ್ತಾರೆ?
*ಅಪ್ಟಪ್ರಧಾನ*
___________________________________
19. ಪೇಶ್ವೆ ಎಂದರೇ ಯಾರು?
*ಪ್ರಧಾನಮಂತ್ರಿ*
___________________________________
20. ಮರಾಠ ಮನೆತನದಲ್ಲಿ ಹಣಕಾಸು ‌ಮಂತ್ರಿಯನ್ನು ಎನೇಂದು ಕರೆಯುತ್ತಾರೆ?
*ಅಮಾತ್ಯ*
___________________________________
21. ಶಿವಾಜಿ ಕಾಲದಲ್ಲಿ ಜಾರಿಯಲ್ಲಿದ ಎರಡು ತೆರಿಗೆಗಳು ಯಾವುವು?
*ಚೌತ್ ಮತ್ತು ಸರ್ ದೇಶ ಮುಖ್*
___________________________________
22. ಶಿವಾಜಿ ಕಾಲದಲ್ಲಿ ಜಾರಿಗೆ ತಂದ ಭೂಮಿ ಅಳತೆ ಮಾಡುವ ಮಾಪನ ಯಾವುದು?
*ಕಾಥಿ*
___________________________________
23. ಶಿವಾಜಿ ಕಾಲದಲ್ಲಿ ಇದ್ದ ನೌಕ ತರಬೇತಿ ಕೇಂದ್ರ ಯಾವುದು?
*ಮಹಾರಾಷ್ಟ್ರ ದ ಕೊಲಾಬಾ*
___________________________________
24. ಶಿವಾಜಿಯ ದಕ್ಷಿಣ ರಾಜಧಾನಿ ಯಾವುದು?
*ಜಿಂಜಿ ತಮಿಳುನಾಡು*
___________________________________
25. ಶಿವಾಜಿಯ ಎರಡು ಅಶ್ವಪಡೆಯ ವಿಧಗಳು ಯಾವುವು?
*ಭಾಗಿರ್ ಮತ್ತು ಶಿಲಾಧಾರನ್*
___________________________________
26. ಶಿವಾಜಿಯ ಸಹೋದರಿ ಎಂದು ಪ್ರಸಿದ್ಧಿ ಪಡೆದ ದಕ್ಷಿಣ ಭಾರತದ ರಾಣಿ ಯಾರು?
*ಕೆಳದಿ ಚೆನ್ನಮ್ಮ*
___________________________________
27. ಶಿವಾಜಿ ಜೀವನ ಚರಿತ್ರೆ ಯನ್ನು ಹಿಂದೂಗಳ ವೀರ ಚರಿತ್ರೆ ಎಂದು ಕರೆದವರು ಯಾರು?
*ಗ್ರಾಂಡ್ ಡಫ್ ಇತಿಹಾಸ ಕಾರ*
___________________________________
28. ಶಿವಾಜಿ‌ ನಂತರ ಮರಾಠ ಮನೆತನ ಆಳಿದವರು ಯಾರು?
*ಶಿವಾಜಿ ಮೊದಲ ಮಗ ಸಾಂಭಾಜಿ*
___________________________________
29. ಸಾಂಭಾಜಿ ನಂತರ ಮರಾಠ ಮನೆತನ ಆಳಿದವರು?
*ರಾಜಾರಾಮ್*
___________________________________
30. ಯಾರ ಕಾಲದಲ್ಲಿ  ಮರಾಠ ಮನೆತನ ಎರಡು ಭಾಗವಾಯಿತು?
*ಸಾಹು ಮತ್ತು ಎರಡನೇ ಶಿವಾಜಿ*
___________________________________
31.  ಮರಾಠರ ಪೇಶ್ವೇಗಳ ಆಡಳಿತ ಯಾವಾಗ ಪ್ರಾರಂಭವಾಯಿತು?
*1713*
___________________________________
32. ಮರಾಠರ ಮೊದಲ ಪೇಶ್ವೆ ಯಾರು?
*ಬಾಲಾಜಿ ವಿಶ್ವನಾಥ*
___________________________________
33. ಬಾಲಾಜಿ ವಿಶ್ವನಾಥನಿಗೆ ಸಾಹು ನೀಡಿದ ಬಿರುದು ಯಾವುದು?
*ಸೇನೆಯ ಕಾರ್ಯಭಾರದ ನಿಯೋಗಿ*
___________________________________
34. ಮರಾಠರ ಪ್ರಸಿದ್ಧ ಪೇಶ್ವೆ ಯಾರು?
*ಒಂದನೇ ಬಾಜಿರಾವ್*
___________________________________
35. ಎರಡನೇ ಶಿವಾಜಿ ಎಂದು ಯಾರನ್ನು ಕರೆಯುತ್ತಾರೆ?
*ಒಂದನೇ ಬಾಜಿರಾವ್*
___________________________________
36. ಒಂದನೇ ಬಾಜಿರಾವ್ ಪೇಶ್ವೆ ಸ್ಥಾಪಿಸಿದ ಹಿಂದೂ ಸಂಘಟನೆ ಯಾವುದು?
*ಹಿಂದೂ ಪಾದ್ ಬಾದ್ ಷಾಹಿ*
___________________________________
37. ಮರಾಠ ಸಾಮ್ರಾಜ್ಯ ದ ಪುನರ್ ಸ್ಥಾಪಕ ಯಾರು?
*ಒಂದನೇ ಬಾಜಿರಾವ್*
___________________________________
38. ಹಿಂದೂ ಪಾದ್ ಬಾದ್ ಷಾಹಿ ಸಂಘಟನೆ ಯನ್ನು ಕೈ ಬಿಟ್ಟವರು ಯಾರು?
*ಬಾಲಾಜಿ ಬಾಜಿರಾವ್*
___________________________________
39. ಪೇಶ್ವೆ ಗಳ ರಾಜಧಾನಿ ಯಾವುದು?
*ಪುಣೆ*
___________________________________
40. ಗೆರಿಲ್ಲಾ ಯ

ುದ್ದ ಬದಲಿಗೆ ಯುರೋಪಿನ ಯುದ್ಧ ತಂತ್ರ ಬಳಸಿದವರು?
*ಬಾಲಾಜಿ ಬಾಜೀರಾವ್*
________