Thursday, 22 June 2017

ದೇವರಿಗಿಂತ ದೇಶ ಮೊದಲು



    ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಶ್ವಕವಿ ರವೀಂದ್ರನಾಥ ಠಾಕೂರರು ಜಪಾನ್ ಪ್ರವಾಸದಲ್ಲಿದ್ದರು. ಒಮ್ಮೆ ಅಲ್ಲಿನ ಶಾಲೆಯೊಂದರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆಗ ಗುರುದೇವ ರವೀಂದ್ರರು "ನೀವು ಯಾವ ಮತವನ್ನು ಆಚರಿಸುತ್ತೀರಿ?" ಎಂದು ಕೇಳಿದರು.

    "ಬೌದ್ಧ ಮತ" ವಿದ್ಯಾರ್ಥಿಗಳ ಉತ್ತರ.

    "ಬೌದ್ಧ ಮತ ಸ್ಥಾಪಿಸಿದ ಭಗವಾನ್ ಬುದ್ಧ ಭಾರತದಲ್ಲಿ ಹುಟ್ಟಿದವರೆಂದು ನಿಮಗೆ ಗೊತ್ತಿರಬೇಕಲ್ಲವೇ?" ಗುರುದೇವರ ಪ್ರಶ್ನೆ.

    "ಹೌದು ನಮಗದು ಚೆನ್ನಾಗಿ ಗೊತ್ತು" ಬಾಲಕರೆಂದರು.

    "ಭಗವಾನ್ ಬುದ್ಧನ ನಾಯಕತ್ವದಲ್ಲಿ ಸೈನ್ಯವೊಂದು ನಿಮ್ಮ ದೇಶದ ಮೇಲೆ ಆಕ್ರಮಣಕ್ಕಾಗಿ ಬಂದಿದೆ ಎಂದು ಕಲ್ಪಿಸಿಕೊಳ್ಳಿ. ಆಗ ನೀವೇನು ಮಾಡುವಿರಿ?" ಗುರುದೇವರ ಪ್ರಶ್ನೆ ಸ್ವಲ್ಪ ಜಟಿಲವಾಗಿತ್ತು.

    "ನಾವು ಬುದ್ಧನನ್ನು ಎದುರಿಸುತ್ತೇವೆ. ನಮ್ಮ ದೇಶದಲ್ಲಿರುವ ಭಗವಾನ್ ಬುದ್ಧನ ಮೂರ್ತಿಗಳನ್ನೆಲ್ಲಾ ಕರಗಿಸಿ ಮದ್ದು ಗುಂಡುಗಳನ್ನು ತಯಾರಿಸುತ್ತೇವೆ. ಬುದ್ಧನನ್ನು ಮಾತ್ರವಲ್ಲ, ಆತನೊಡನೆ ಬಂದ ಸೈನವನ್ನೆಲ್ಲಾ ಸುಟ್ಟು ಬೂದಿ ಮಾಡುತ್ತೇವೆ" ಬಾಲ ವಿದ್ಯಾರ್ಥಿಯೊಬ್ಬ ರೋಷದಿಂದ ಗುಡುಗಿದ.

    ಬಾಲಕನ ಆ ಉತ್ತರದಲ್ಲಿ ಗುರುದೇವರು ಜಪಾನಿನ ಉಜ್ವಲ ಭವಿಷ್ಯವನ್ನು ಕಾಣುತ್ತಾ ಅವರ ದೇಶಭಕ್ತಿಯೆದುರು ನತಮಸ್ತಕರಾದರು.

No comments:

Post a Comment