Thursday, 29 June 2017

ಜಾತಿ



    ವ್ಯಕ್ತಿಯನ್ನು ಜೋಡಿಸಬೇಕಾದರೆ ಏನೇನು ಕಷ್ಟಗಳನ್ನು ಅನುಭವಿಸಬೇಕಾಗುವುದು ಎನ್ನುವುದಕ್ಕೆ ಒಂದು ಉದಾಹರಣೆ. ಪ್ರಚಾರಕರಾಗಿದ್ದ ನ. ಕೃಷ್ಣಪ್ಪನವರು ಕಪ್ಪಗಿದ್ದರು. ಅವರ ಜೊತೆಯಲ್ಲಿ ರಮಾನಾಥ ರೈ ಎನ್ನುವ ಇನ್ನೊಬ್ಬ ಪ್ರಚಾರಕರು. ಅವರು ಬೆಳ್ಳಗಿದ್ದರು. ಎಲ್ಲರಿಗೂ ರಮಾನಾಥರು ಬ್ರಾಹ್ಮಣ ಎನ್ನುವ ಕಲ್ಪನೆ, ಕೃಷ್ಣಪ್ಪನವರು ಬ್ರಾಹ್ಮಣರಲ್ಲ ಎನ್ನುವ ಅನಿಸಿಕೆ. ಕೃಷ್ಣಪ್ಪನವರಿಗೆ ಯಾವಾಗಲೂ ಮನೆಯ ಹೊರಗಡೆ ಊಟ. ರಮಾನಾಥ ರೈ ಅವರಿಗೆ ಮನೆ ಒಳಗಡೆ ಊಟ. ಎಂದೂ ರಮಾನಾಥ ರೈಗಳು ತಾವು ಬ್ರಾಹ್ಮಣ ಅಲ್ಲ ಎಂದು ಹೇಳಿಕೊಳ್ಳಲಿಲ್ಲ ಅಥವಾ ಕೃಷ್ಣಪ್ಪನವರು ತಾವು ಬ್ರಾಹ್ಮಣ ಎಂದು ಹೇಳಿಕೊಳ್ಳಲಿಲ್ಲ.

No comments:

Post a Comment