Thursday, 27 April 2017

ವಿಯಟ್ನಾಂ ದೇಶದಲ್ಲಿ ಶಿವಾಜಿ !!!

*ಯುದ್ಧ ಮತ್ತು ದುರಂತ*
ಅಂದಾಜು 20 ವಷ೯ದ  ಯುದ್ದದ ನಂತರ ವಿಯಟ್ನಾಮ್ ದೇಶ, ಅಮೇರಿಕಾವನ್ನು ಆ ದೇಶ ಬಿಟ್ಟು ಹೋಗುವಂತೆ, ಗೆಲುವು ಸಾಧಿಸಿತು. ವಿಯಟ್ನಾಮ್ ಒಂದು ಸಣ್ಣ ದೇಶ. ಅಮೇರಿಕಾದಂತಾ ಬಲಿಷ್ಟ ರಾಷ್ಟ್ರಕ್ಕೆ ಸೆಡ್ಡು ಹೊಡೆದು ಗೆಲುವು ಸಾಧಿಸಬೇಕಾದರೆ, ಅದು ಹೇಗೆ ಸಾಧ್ಯವಾಯಿತು?
ಗೆಲುವಿನ ನಂತರ ವಿಯಟ್ನಾಮ್ ದೇಶದ ರಾಷ್ಟ್ರಪತಿಗೆ ಮಾಧ್ಯಮದವರು ಒಂದು ಪ್ರಶ್ನೆ ಕೇಳಿದರು." ಅಮೇರಿಕಾವನ್ನು ಹೇಗೆ ಸೋಲಿಸಲು ಸಾಧ್ಯವಾಯಿತು? ಯುದ್ದದಲ್ಲಿ ಹೇಗೆ ಗೆಲುವು ಸಾಧಿಸಿದ್ದೀರಿ?"
ರಾಷ್ಟ್ರಪತಿ ಹೇಳಿದ: "ನಿಜ ಹೇಳಬೇಕು ಅಂದರೆ, ಅಮೆರಿಕಾದಂತಾ ಬಲಿಷ್ಟ ರಾಷ್ಟ್ರವನ್ನು ಸೋಲಿಸುವುದು ಅಸಾಧ್ಯದ ಮಾತು. ಆದರೆ ಇಂತಾ ಮಹಾಶಕ್ತಿಯನ್ನು ಎದುರಿಸಲು ನನಗೆ ನೆರವಾಗಿದ್ದು, ಭಾರತ ದೇಶದ ಒಬ್ಬ ಮಹಾನ್ ರಾಜನ ಚರಿತ್ರೆ. ಆ ರಾಜನಿಂದ ಪ್ರೇರಣೆ ಪಡೆದು ನಾನು ರಣತಂತ್ರ ರೂಪಿಸಿದೆ. ಅದು ಕಾಯ೯ ರೂಪಕ್ಕೆ ತಂದೆ "
ಪತ್ರಕತ೯ರು ಕುತೂಹಲದಿಂದ ಕೇಳಿದರು : "ಆ ರಾಜ ಯಾರು?"
"ಭಾರತ ದೇಶದ ಛತ್ರಪತಿ ಶಿವಾಜಿ ಮಹಾರಾಜ್ " ಎಂದು ಉತ್ತರಿಸಿದ. ಅಷ್ಟೇ ಅಲ್ಲ, ಅಂತಾ ಒಬ್ಬ ವ್ಯಕ್ತಿ ನಮ್ಮ ದೇಶದಲ್ಲಿ ಹುಟ್ಟಿದರೆ, ಇವತ್ತು ನಮ್ಮ ದೇಶ ಇಡೀ ವಿಶ್ವವನ್ನೇ ಆಳುತ್ತಿದ್ದೆ', ಎಂದರು.
ಸ್ವಲ್ಪವರ್ಷಗಳ ನಂತರ ಆ ರಾಷ್ಟ್ರಪತಿ ದೇಹ ವಿಯೋಗ ಮಾಡಿದ. ಆತನ ಸಮಾಧಿ ಸ್ಥಳದಲ್ಲಿ ಹೀಗೆ ಬರೆಯಲು ಆಜ್ಞಾಪಿಸಿದ್ದ- '' ಶಿವಾಜಿ ಮಹಾರಾಜನ ವಿನಯಾನ್ವಿತ ಸೈನಿಕನೊಬ್ಬ ಸಮಾಧಿಯಾದ ಸ್ಥಳ ''
ಈ ಬರಹ ಈಗಲೂ ನೀವು ಅಲ್ಲಿ ಹೋದರೆ ಕಾಣಬಹುದು.
ವಷ೯ಗಳ ನಂತರ ವಿಯಟ್ನಾಮಿನ ವಿದೇಶಾಂಗ ಸಚಿವರು ಔದ್ಯೋತಿಕವಾಗಿ ಭಾರತಕ್ಕೆ ಬೆಟ್ಟಿಕೊಟ್ಟರು. ಸರಕಾರ ಅವರಿಗೆ ಕೆಂಪು ಕೋಟೆ, ಗಾಂಧಿ ಸಮಾಧಿ ಎಲ್ಲವೂ ತೊರಿಸಿದರು. ಆಗ ಅವರು ಕೇಳಿದ್ದು "ಶಿವಾಜಿ ಮಹಾರಾಜರ ಸಮಾಧಿ ಸ್ಥಳ ಎಲ್ಲಿ " ಎಂದು. ಇದು ಕೇಳಿ  ಸರಕಾರದ ಪ್ರತಿನಿಧಿಗಳಿಗೆ ಅಶ್ಚಯ೯ವಾಯಿತು. ಅವರ ಬೇಡಿಕೆಯಂತೆ, ಅವರನ್ನು ಮಹಾರಾಷ್ಟ್ರದ ರಾಯಗಡಕ್ಕೆ ಕರತರಲಾಯಿತು. ಅಲ್ಲಿ ನಮನ ಸಲ್ಲಿಸಿದ ಬಳಿಕ, ಅಲ್ಲಿಂದ ಒಂದು ಹಿಡಿ ಮಣ್ಣು ತೊಗೊಂಡು ತನ್ನ ಬಾಗಿನಲ್ಲಿ ಹಾಕ್ಕಿದರು. 'ಇಲ್ಲಿಂದ ಮಣ್ಣು ಏಕೆ ತೊಗೊಂಡಿರಿ' ಎಂಬ ಪತ್ರಕತ೯ರ ಪ್ರಶ್ನೆಗೆ - "ಈ ಮಣ್ಣು ಶ್ಔರ್ಯ, ವೀರ, ಪರಾಕ್ರಮದ ಮಣ್ಣು. ಈ ಮಣ್ಣಲ್ಲಿಯೇ, ಶಿವಾಜಿಯಂತಾ ಮೇಧಾವಿ ಹುಟ್ಟಿದ್ದು, ಬೆಳೆದಿದ್ದು. ಇಂತಾ ಪವಿತ್ರ ಮಣ್ಣನ್ನು ನಾನು ನನ್ನ ದೇಶದ ಮಣ್ಣಿನೊಂದಿಗೆ ಬೆರಸುತ್ತೇನೆ. ಹಾಗೆ ನಮ್ಮ ದೇಶದಲ್ಲೂ ಶಿವಾಜಿಯಂತಾ ಮಹಾನ್ ಪುರುಷರು  ಹುಟ್ಟಲಿ''
(ಈ ವಿಚಾರಗಳು ಮಕ್ಕಳ ಪಠ್ಯ ಪುಸ್ತಕದಲ್ಲಿ ಕಂಡು ಬರುವುದಿಲ್ಲ ಅನ್ನೋದೇ ನಮ್ಮು  ಪಾಠ್ಯಕ್ರಮದ ವ್ಯವಸ್ಥೆ)
*ದುರಂತ (ನಂಬರ್ ಒಂದು)*
ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ಏರ್ಪೆಡಿಸಿದ ಮೆರವಣಿಗೆಯಲ್ಲಿ ನಾನು ಪಾಲ್ಗೊಂಡಿದ್ದೆ. ಆಗ ಒಬ್ಬ ಮನುಷ್ಯ ಕೇಳಿದ - "ನೀವು ನಮ್ ಜನಾನಾ?"
ಇಲ್ಲಿನ ಮಹಾಪುರುಷರುಗಳನ್ನು, ದೇವರುಗಳನ್ನು  ಕೆಲವು ಜನಾಂಗದವರು ಹಂಚಿಕೊಂಡಿದ್ದು ಈ ದೇಶದ ದುರಂತವೇ ಸರಿ.
*ದುರಂತ (ನಂಬರ್ ಎರಡು)*
ಇಲ್ಲಿ ಬಿದ್ದು ಸತ್ತ ವಿದೇಶಿಯರ ಹೆಣ ಕೊಳೆತು ಈ ಮಣ್ಣಲ್ಲಿ ಬೆರತು, ವಿಷ ಬೀಜಗಳಾಗಿ, ಆಳದಲ್ಲಿ ಬೇರು ಬಿಟ್ಟು, ಎಲ್ಲಿ ಬೇಕೆಂದರಲ್ಲಿ ಹೆಮ್ಮರವಾಗಿ ಬೆಳದು, ವಿಷ ಉಗುಳುತ್ತಿವೆ. ಈ ಮರದ ಹೆಸರು 'ರಾಜಕಾರಣಿ'

No comments:

Post a Comment