Wednesday, 26 April 2017

ಸದ್ವಿಚಾರ ಧಾರೆಯಿಂದ ಚಿಮ್ಮಲಿ ಸ್ಪೂರ್ತಿ

🍁🍁 ಸುವಿಚಾರ ಸಂಪದ 🍁🍁

*ನಮ್ಮಲ್ಲಿ ಜ್ಞಾನ, ಸಂಪತ್ತು ಕ್ಷಮತೆ ಮತ್ತು ದಕ್ಷತೆಗಳಿವೆಯೆಂದು ಹೆಮ್ಮೆ ಪಡಬೇಕಾಗಿಲ್ಲ.ಅದನ್ನು ನಾವಿರುವ ಸಮಾಜದ ಸರ್ವರ ಹಿತಕ್ಕಾಗಿ ಬಳಸಿದರೆ ಮಾತ್ರ ಆ ಬಗ್ಗೆ ನಾವು ಹೆಮ್ಮೆ ಪಡಬಹುದು..*
----------

*ವಿವೇಕ ವಾಣಿ*

ಸದಾ ನಿನ್ನ ಮನಸ್ಸು ಶಕ್ತಿಪೂರ್ಣವಾಗಿರುವಂತೆ ನೋಡಿಕೋ.
ನಿನ್ನ ಮಾತುಗಳಲ್ಲಿಯೂ ಸದಾ ಶಕ್ತಿಯೇ ಚಿಮ್ಮುತಿರಲಿ.
"ನಾನು ದುರ್ಬಲ, ನನ್ನ ಕೈಲೇನಾದೀತು" ಎಂದು ಹೇಳಿಕೊಳ್ಳುತ್ತಲೇ ಇದ್ದರೆ ಮನುಷ್ಯ ಕೈಲಾಗದವನೇ ಆಗುತ್ತಾನೆ.
ಕಸಕ್ಕಿಂತ ಕಡೆಯಾಗುತ್ತಾನೆ .
----------

*ಹೂವಿನಿಂದ ಕಿತ್ತು ತಂದ ಮಕರಂದದಿಂದ ಮಾಡಿದ ಜೇನು... ಜೇನುಹುಳಗಳಿಗೇ ದಕ್ಕುವುದಿಲ್ಲ. ಎಂದಾದರೆ ಪರರ ಬಳಿ ಕಿತ್ತು ಮಾಡಿದ ಸಂಪತ್ತು ಉಳಿಯುವುದಾ???
ಕಿತ್ತು ತಂದದ್ದು ಹೊತ್ತು ಮುಳುಗುವವರೆಗೆ

---------

ತಾವರೆ ಕೆಸರಲ್ಲಿ ಹುಟ್ಟಿದರೂ ಭಕ್ತರು ದೇವರ ಪಾದಕ್ಕೆ ಅರ್ಪಿಸುತ್ತಾರೆ, ಪಾಪಾಸುಕಳ್ಳಿ ಹೂ ಬೆಟ್ಟದ ಮೇಲೆ ಸ್ವಚ್ಛ ಜಾಗದಲ್ಲಿ ಹುಟ್ಟಿದರೂ ಅದರ ಉಪಯೋಗವಿಲ್ಲ, ಇದರ ಅರ್ಥ ಹುಟ್ಟು ಮುಖ್ಯವಲ್ಲ ನಮ್ಮ ಬದುಕುವ ರೀತಿ ಮುಖ್ಯ- ಮೆಲುಕು
         🙏  🙏🙏🏻🙏🏻

----------
*ವಿವೇಕ ವಾಣಿ*

ಸದಾ ನಿನ್ನ ಮನಸ್ಸು ಶಕ್ತಿಪೂರ್ಣವಾಗಿರುವಂತೆ ನೋಡಿಕೋ.
ನಿನ್ನ ಮಾತುಗಳಲ್ಲಿಯೂ ಸದಾ ಶಕ್ತಿಯೇ ಚಿಮ್ಮುತಿರಲಿ.
"ನಾನು ದುರ್ಬಲ, ನನ್ನ ಕೈಲೇನಾದೀತು" ಎಂದು ಹೇಳಿಕೊಳ್ಳುತ್ತಲೇ ಇದ್ದರೆ ಮನುಷ್ಯ ಕೈಲಾಗದವನೇ ಆಗುತ್ತಾನೆ.
ಕಸಕ್ಕಿಂತ ಕಡೆಯಾಗುತ್ತಾನೆ .
---------------

🌿🎤 *ಅಮೃತವಾಣಿ* 📢🌿
              .
.ಯಾರು ನಮ್ಮ ಶ್ರಮವನ್ನು ಗಮನಿಸುವುದಿಲ್ಲ...
...ಯಾರು ನಮ್ಮ ನ್ಯಾಯವನ್ನು ಗಮನಿಸುವುದಿಲ್ಲ...
...ಯಾರು ನಮ್ಮ ನೋವನ್ನು ಗಮನಿಸುವುದಿಲ್ಲ...
                  *ಆದರೆ*
"ಎಲ್ಲರೂ ನಾವು ಮಾಡುವ ತಪ್ಪನ್ನು ಗಮನಿಸುತ್ತಾರೆ🖖🙃"
                 
                                                                                                         🌷🌷🌷🌷🌷🌷🌷🌷🌷🌷

------------

ಭಗವಂತನ ಪ್ರೇರಣೆಯಂತೆ ಯಾವಾಗ ಏನಾಗಬೇಕೋ ಅದು ಆಗಿಯೇ ಆಗುತ್ತೆ.ಯಾರ ಹಣೆ ಬರಹನ ಯಾರೂ ಬದಲಿಸಲಾರರು.ಆದರೆ ನಡೆವ ಹಾದಿ ಸ್ಪಷ್ಟ ಮತ್ತು  ಪ್ರಯತ್ನ ನಿರಂತರವಾಗಿರಬೇಕು*            
🙏🌷 **🙏 **🌷🙏

---------------

"ಒಬ್ಬರಿಗೆ ನೋವು ಮಾಡುವುದೆಂದರೆ ಮರವನ್ನು ಕಡಿದು ಉರುಳಿಸಿದಂತೆ- ಕೆಲವೇ ನಿಮಿಷಗಳ ಕೆಲಸ....*
     *"ಒಬ್ಬರನ್ನು ಸಂತೋಷ ಪಡಿಸುವುದೆಂದರೆ ಗಿಡವನ್ನು ನೆಟ್ಟು,ಮರವಾಗಿ ಬೆಳೆಸಿದಂತೆ- ತುಂಬಾ ಸಮಯ, ಪ್ರೀತಿ, ತಾಳ್ಮೆ, ಕಾಳಜಿಯ ಅಗತ್ಯವಿರುತ್ತದೆ....*

---------------

*ಸದಾ ಶ್ರೇಷ್ಠ ಚಿಂತನೆಗಳಿಂದ ಮನಸ್ಸನ್ನು ತುಂಬಿ. ಸೋಲನ್ನು ಲಕ್ಷಿಸಬೇಡಿ.*

*ಹೋರಾಟ ಮತ್ತು ತಪ್ಪುಗಳ ಲೆಕ್ಕ ಇಡಬೇಡಿ.*

*ಸಾವಿರ ಸಲ ಸೋತರೂ ಮತ್ತೊಮ್ಮೆ ಪ್ರಯತ್ನಿಸಿರಿ, ಸೋಲು ಜೀವನದ ಸೌಂದರ್ಯ*

---------------
ದ್ವೇಷಿಸುವುದನ್ನು ಕ್ಷಣಮಾತ್ರದಲ್ಲಿ ಕಲಿಯುವ ಜನರು, ಪ್ರೀತಿಸುವುದನ್ನು ಕಲಿಯಲು ಮಾತ್ರ ಜೀವನದ ಕೊನೆ ಕ್ಷಣದವರೆಗೂ ಕಾಯುತ್ತಾರೆ.
---------------

ಎಲ್ಲಿಯವರೆಗೆ ನಮಗೆ ನಾವು ಪ್ರಾಮಾಣಿಕರಾಗಿರುತ್ತೇವೆಯೋ, ಅಲ್ಲಿಯವರೆಗೂ ಖಂಡಿತವಾಗಿ,
ನಾವು ಸಂತೋಷದಿಂದಿರುತ್ತೇವೆ..

---------------

*ಮರದಿಂದ ಕೆಳ ಬಿದ್ದ ಹೂ ಮತ್ತೆ ಅರಳುವುದಿಲ್ಲ......*
*ಆದರೆ, ಬೇರುಗಳು ಗಟ್ಟಿಯಾಗಿದ್ದರೆ ಮತ್ತೆ ಹೊಸ ಹೂಗಳು ಹುಟ್ಟುತ್ತವೆ.....*
*ಹಾಗೆಯೇ ನಮ್ಮ ಜೀವನದಲ್ಲಿ ಈವರೆಗೆ ಏನನ್ನು ಕಳೆದುಕೊಂಡಿದ್ದೇವೆ ಎಂಬುವುದಕ್ಕಿಂತ, ಇನ್ನೂ ಜೀವನದಲ್ಲಿ ಮುಂದೆ ಎಷ್ಟೊಂದು ಬೆಳೆಯಬೇಕಿದೆ, ಗುರಿ ಮುಟ್ಟ ಬೇಕಿದೆ ಎಂಬುದು ಮುಖ್ಯ......*

--------------
ಚಂದ್ರಗುಪ್ತ ಕೇಳುತ್ತಾನೆ☞
ಎಲ್ಲವೂ ಹಣೆಬರಹದಲ್ಲಿ ಬರೆದಿದ್ದಾರೆ ಅಂದ ಮೇಲೆ ಪ್ರಯತ್ನ ಪಟ್ಟು ಫಲವೇನು?

ಚಾಣಕ್ಯ ಉತ್ತರಿಸುತ್ತಾನೆ☞
ಯಾರಿಗೆ ಗೊತ್ತು ಪ್ರಯತ್ನ ಪಟ್ಟರೆ ಸಿಗುತ್ತದೆ ಎಂದು ಹಣೆಬರಹದಲ್ಲಿ ಬರೆದಿದ್ದರೆ.!!!?

--------------
---------------
--------------
---------------
--------------
---------------

No comments:

Post a Comment