Thursday, 22 June 2017

ಸ್ವದೇಶಾಭಿಮಾನ

ಪಂಡಿತ ವಿಷ್ಣುದಿಗಂಬರ ಪಲುಸ್ಕರ್ ಓರ್ವ ಸುಪ್ರಸಿದ್ಧ ಸಂಗೀತ ವಿದ್ವಾಂಸರು. ಗಂಧರ್ವ ಮಹಾವಿಶ್ವವಿದ್ಯಾಲಯದ ಸ್ಥಾಪಕರು. ೧೯೧೬ರಿಂದಲೇ ಪ್ರತಿವರ್ಷ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದರು. ಅಧಿವೇಶನದ ಆರಂಭದಲ್ಲಿ ಮೊದಲು ರಾಷ್ಟ್ರಗೀತೆ ಹಾಡುವುದನ್ನು ರೂಪಿಸಿದ್ದರು.

    ೧೯೨೩ರ ಕಾಕಿನಾಡಾ ಅಧಿವೇಶನದ ಅಧ್ಯಕ್ಷರು ಮೌಲಾನಾ ಮಹಮದ್ ಅಲಿ. ಪಲುಸ್ಕರ್ ಪದ್ಧತಿಯಂತೆ ವಂದೇ ಮಾತರಂ ಹಾಡಲು ತೊಡಗಿದಾಗ ಅಲಿ ಅದಕ್ಕೆ ಅಡ್ಡಿ ಪಡಿಸುತ್ತಾ ಹಾಡು, ವಾದ್ಯಗಳು ತಮ್ಮ ಸಂಪ್ರದಾಯಕ್ಕ ವಿರುದ್ಧವೆಂದರು. ಗಾಂಧೀಜಿ ಸಹಿತ ಅಲ್ಲಿದ್ದ ನಾಯಕರೆಲ್ಲಾ ಸ್ತಂಭಿತರಾದರು. ಪಲುಸ್ಕರರಿಗೆ ತಡೆಯಲಾಗಲಿಲ್ಲ. "ಸಂಗೀತ ಬೇಡವೆನ್ನಲು ಇದು ಮಸೀದಿಯಲ್ಲ. ರಾಷ್ಟ್ರೀಯ ವೇದಿಕೆ" ಎಂದು ಹೇಳುತ್ತಾ ಅಧ್ಯಕ್ಷರಿಗೆ ಮರುಮಾತಿಗೆ ಅವಕಾಶ ನೀಡದೆ ವಂದೇ ಮಾತರಂ ಹಾಡಲು ತೊಡಗಿದರು. ಮಹಮದ್ ಅಲಿ ತಮ್ಮ ಪೀಠ ಬಿಟ್ಟು ಹೊರನಡೆದರು. ಪಲುಸ್ಕರರು ವಂದೇ ಮಾತರಂ ಪೂರ್ತಿ ಹಾಡಿದರು.

    ಅವರ ದೇಶಾಭಿಮಾನ ಮತ್ತು ತಾಯಿನಾಡಿನ ಕುರಿತು ಭಕ್ತಿ ದೇಶವಾಸಿಗಳ ಆದರಕ್ಕೆ ಕಾರಣವಾದವು. ಜನರು ಅವರನ್ನು ಮುಕ್ತಕಂಠದಿಂದ ಹೊಗಳಿದರು.

No comments:

Post a Comment