ಪಾಣಿನಿಯ ಪ್ರತಿಜ್ಞೆ
ಇಂದಿನ ಪಾಠವನ್ನು ಮರುದಿನ ಪುನಃಸ್ಮರಣೆ ಮಾಡಲು ಗುರುಗಳು ಶಿಷ್ಯರಿಗೆ ಹೇಳಿದ್ದರು. ಮರುದಿನ ಕೆಲವರಿಂದ ಇದು ಸಾಧ್ಯವಾಗಲಿಲ್ಲ. ಗುರುಗಳು ಬೆತ್ತದಿಂದ ಏಟು ಕೊಡತೊಡಗಿದರು.
ಒಬ್ಬ ಹುಡುಗ ಏಟಿಗಾಗಿ ಕೈ ಚಾಚಿದ. ಅವನ ಕೈಯನ್ನು ನೋಡಿ "ಏಯ್! ನಿನ್ನ ಕೈಯಲ್ಲಿ ವಿದ್ಯಾರೇಖೆಯೇ ಇಲ್ಲ. ನೀನು ಪಾಠ ಕಲಿತು ಹೇಳುವುದೆಂದರೇನು? ಕುಳಿತುಕೋ" ಎಂದ ಗುರುಗಳು ಅವನಿಗೆ ಹೊಡೆಯಲಿಲ್ಲ. ಆತ ಇದರಿಂದ ಅವಮಾನಿತನಾದ. ಒಂದು ಕ್ಷಣ ಏನು ಮಾಡುವುದೆಂದು ತಿಳಿಯದೆ ಚಡಪಡಿಸಿದ. "ನನ್ನ ಕೈಯಲ್ಲಿ ವಿದ್ಯಾರೇಖೆಯನ್ನು ಕೊರೆಯುತ್ತೇನೆ" ಎಂದು ಮನದಲ್ಲೇ ಪ್ರತಿಜ್ಞೆ ಮಾಡಿದ. ಕಠೋರ ಪರಿಶ್ರಮದಿಂದ ವಿದ್ಯಾಭ್ಯಾಸ ಆರಂಭಿಸಿದ.
ಸತತ ಅಧ್ಯಯನದಿಂದ ಮುಂದೆ ಆತ ’ವ್ಯಾಕರಣಾಚಾರ್ಯ ಪಾಣಿನಿ’ ಎಂದು ಪ್ರಖ್ಯಾತನಾದ.
No comments:
Post a Comment