Friday, 16 June 2017

ಯುಗದ ನಿರೀಕ್ಷೆಯ ಬಸಿರಿಂದ ::


ಯುಗದ ನಿರೀಕ್ಷೆಯ ಬಸಿರಿಂದ, ಉದಿಸುತ ತಪಸಿನ ಬಲದಿಂದ
ಜಗದಲಿ ಧರ್ಮಧ್ವಜವನು ಮೆರೆಸಿದೆ ಹಿಂದುತ್ವದ ಹುಂಕೃತಿಯಿಂದ
ಯುಗಪುರುಷ ವಿವೇಕಾನಂದ... ಯುಗಪುರುಷ ವಿವೇಕಾನಂದ... ಯುಗಪುರುಷ ವಿವೇಕಾನಂದ    ||ಪ||

ಸಂಘಟನೆಯೆ ನಾಡಿನ ಶಕ್ತಿ, ವಿಶ್ವದ ಹಿತದಲೆ ನಿಜಮುಕ್ತಿ
ತೊರೆಯಿರಿ ಭಯವ! ಬಲಮುಪಾಸ್ವ! ಭಾರತಮಾತೆಯೆ ಪರದೈವ
ದರಿದ್ರನಾರಾಯಣೋಭವ !
ಇದೆ ಆಧ್ಯಾತ್ಮದ ತಿರುಳೆಂದ - ಯುಗಪುರುಷ ವಿವೇಕಾನಂದ        ||೧||

ಗಿರಿವನ ಗ್ರಾಮವ ಮುಟ್ಟುತಲಿ, ಮನೆ-ಮನಗಳ ಕದ ತಟ್ಟುತಲಿ
ಭರತಕುಲವ ಬಂಧುತ್ವದಿ ಬೆಸೆಯುತ ಹೊಸನಾಡೊಂದನು ಕಟ್ಟುವೆವು
ಮರಳಿ ಸಿರಿಯ ತಂದೊಟ್ಟುವೆವು !
ಪ್ರೇರಣೆ ಪಡೆವೆವು ನಿನ್ನಿಂದ - ಯುಗಪುರುಷ ವಿವೇಕಾನಂದ        ||೨||

ತರತಮ ಭೇದವ ಹೂಳುವೆವು, ಸಮರಸ ಸೂತ್ರದಿ ಬಾಳುವೆವು
ಅಂಜದ ಎದೆಯಿದೆ ದೈವದ ಒಲವಿದೆ ವಿಘ್ನವಿರೋಧವ ಸೀಳುವೆವು
ನಾಳೆಗಳನು ನಾವಾಳುವೆವು!
ಭರವಸೆ ನಿನ್ನಯ ನುಡಿಯಿಂದ - ಯುಗಪುರುಷ ವಿವೇಕಾನಂದ    ||೩||

ಪರಾನುಕರಣೆಯ ಸೆರೆ ಹರಿದು, ಸ್ವಾಭಿಮಾನ ಸವಿ ಸುಧೆ ಕುಡಿದು
ಪುನರಪಿ ವಿಶ್ವಗುರುತ್ವ ಕಿರೀಟವ ಭಾರತಮಾತೆಗೆ ತೊಡಿಸುವೆವು
ಸಂಘಟನೆಯ ಧೃಡಪಡಿಸುವೆವು!
ಕೃತಸಂಕಲ್ಪವು ಯುವವೃಂದ - ಯುಗಪುರುಷ ವಿವೇಕಾನಂದ    ||೪||

No comments:

Post a Comment