Thursday, 22 June 2017

ಸಂಘ ಕಲಿಸಿದ ತ್ಯಾಗ



   ಹರಿಯಾಣದ ಒಂದು ಚಿಕ್ಕ ಊರು. ಅಲ್ಲಿನ ನಗರ ಕಾರ್ಯವಾಹ ಒಂದು ದಿನ ತನ್ನ ಸೈಕಲ್ಲಿನಲ್ಲಿ ಹೋಗುತ್ತಿದ್ದ. ಸ್ವಲ್ಪ ದೂರದ ನಂತರ ಆಕಾಶಕ್ಕೆ ಚಿಮ್ಮುತ್ತಿದ್ದ ಬೆಂಕಿ ಹೊಗೆಯನ್ನು ಕಂಡ. ವ್ಯಾಕುಲಗೊಂಡು ಸೈಕಲ್ಲನ್ನು ಜೋರಾಗಿ ತುಳಿದುಕೊಂಡು ಹತ್ತಿರ ಹೋಗಿ ನೋಡುತ್ತಾನೆ.

    ಅದು ಒಂದು ಶಾಲೆ. ಅಂದು ಆ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ. ಹಾಕಿದ್ದ ಪೆಂಡಾಲಿಗೆ ಅಕಸ್ಮಾತ್ ಬೆಂಕಿ ಬಿದ್ದು ಉರಿಯತೊಡಗಿತ್ತು.

    ನೋಡ ನೋಡುತ್ತಿದ್ದಂತೇ ಬೆಂಕಿ ಇಡೀ ಸಭಾಂಗಣವನ್ನೇ ಮುತ್ತಿತು. ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲರೂ ಹೊರಗೆ ಓಡತೊಡಗಿದರು. ಕೆಲವು ಮಕ್ಕಳು ಇತರರ ಕಾಲ್ತುಳಿತಕ್ಕೆ ಸಿಲುಕಿ ಬಿದ್ದರು. ಬೆಂಕಿ ಇನ್ನೂ ಹೆಚ್ಚಾಗತೊಡಗಿತ್ತು. ಹೊರಗೆ ಓಡಿದ್ದ ಎಲ್ಲರೂ ಒಳಗೆ ಸಿಕ್ಕಿ ಹಾಕಿಕೊಂಡಿದ್ದ ಮಕ್ಕಳ ಬಗ್ಗೆ ಕೂಗಿಕೊಳ್ಳತೊಡಗಿದರು.

    ಆ ದೃಶ್ಯ ನೋಡಿದ ಆ ಕಾರ್ಯವಾಹ ತನ್ನ ಸೈಕಲ್ಲನ್ನು ಅಲ್ಲಿಯೇ ಎಸೆದು ಎಲ್ಲರೂ ನೋಡುತ್ತಿದ್ದಂತೆಯೇ ಆ ಪೆಂಡಾಲಿನ ಒಳಗೆ ನುಗ್ಗಿದ. ಒಳಗೆ ಬೆಂಕಿಯ ಮಧ್ಯದಲ್ಲಿ ಸಿಕ್ಕಿಕೊಂಡಿದ್ದ ಮಕ್ಕಳನ್ನು ಎತ್ತಿಕೊಂಡು ಹೊರಗೆ ತಂದು ಬಿಡತೊಡಗಿದ. ಬೆಂಕಿ ಇನ್ನೂ ಜೋರಾಗತೊಡಗಿತು.

    ಒಳಗಿದ್ದ ೧೩ ಮಕ್ಕಳನ್ನು ಉಳಿಸಿ ಮತ್ತೆ ಒಳಗೆ ಹೋದವನು ಮತ್ತೆ ಹೊರ ಬರಲಾಗದೆ ಒಳಗೆ ಬೆಂಕಿಯಲ್ಲಿ ಸಿಕ್ಕಿ ಸಾವಿಗೀಡಾಗುತ್ತಾನೆ.

    ಆ ಸಮಯದಲ್ಲಿ ಅವನ ಹೆಂಡತಿ ತುಂಬು ಗರ್ಭಿಣಿ. ಯಾರೋ ಹೇಳಿದ ವಾರ್ತೆ ಕೇಳಿ ಗಂಡನನ್ನು ಹುಡುಕಿಕೊಂಡು ಬರುತ್ತಾಳೆ. ಪೂರ್ತಿ ಬೆಂದು ಹೋದ ಅವನ ದೇಹವನ್ನು ಗುರುತಿಸಲು ಅವಳಿಗೆ ಸಾಧ್ಯವಾಗಿದ್ದು ಅವನು ಹಾಕಿಕೊಂಡಿದ್ದ ಉಂಗುರದ ಸಹಾಯದಿಂದ.

No comments:

Post a Comment