೧೯೭೫ನೇ ಇಸವಿಗೆ ಮುಂಚೆ ಜಯಪ್ರಕಾಶ್ ನಾರಾಯಣ ಹೇಗಿದ್ದರು? ೧೯೪೮ನೇ ಇಸವಿಯಲ್ಲಿ ಅವರು ಹೇಳಿದ್ದು ’ನನ್ನ ಜೀವನದ ಏಕಮಾತ್ರ ಧ್ಯೇಯವೆಂದರೆ ಆರ್.ಎಸ್.ಎಸ್.ನ ನಾಶ’ ಎಂದು. ಸುಮಾರು ೫ ಸಾವಿರ ಜನರನ್ನು ಕರೆದುಕೊಂಡು ದೆಹಲಿಯ ಆಗಿನ ಸಂಘಚಾಲಕಾರಿಗಿದ್ದ ಲಾಲಾ ಹಂಸರಾಜ ಗುಪ್ತರವರ ಮನೆಗೆ ಬೆಂಕಿ ಇಡಲು ಬಂದಿದ್ದರು. ಮುಂದೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಡೆದ ಹೋರಾಟ ಅವರ ನೇತೃತ್ವದಲ್ಲೇ ಸಮಗ್ರ ಕ್ರಾಂತಿ ಅಥವಾ ಲೋಕಸಂಘ ಸಮಿತಿ ಹೆಸರಿನಲ್ಲಿ ನಡೆಯಿತು. ಅವರು ಜೈಲು ಸೇರಿದಾಗ ಅವರು ಹೇಳಿದ್ದು ’ಈಗ ಆರ್.ಎಸ್.ಎಸ್ ಬಿಟ್ಟರೆ ಇನ್ಯಾರೂ ಈ ದೇಶಕ್ಕೆ ಗತಿ ಇಲ್ಲ. ಈ ದೇಶವು ಈ ಸ್ಥಿತಿಯಿಂದ ಪಾರಾಗಬೇಕಾದರೆ ಅದು ಸಂಘದಿಂದ ಮಾತ್ರ ಸಾಧ್ಯ’ ಎಂದು! ತುರ್ತು ಪರಿಸ್ಥಿತಿಯ ನಂತರ ಅವರು ’ಆರ್.ಎಸ್.ಎಸ್ ಅನ್ನು ಯಾರಾದರೂ ಫ್ಯಾಸಿಸ್ಟ್ ಎಂದು ಕರೆದರೆ, ನನ್ನನ್ನೂ ಫ್ಯಾಸಿಸ್ಟ್ ಎಂದು ಕರೆಯಿರಿ’ ಎಂದರು.
ಹಾಗೆಯೇ, ಆಚಾರ್ಯ ವಿನೋಬಾ ಭಾವೆಯವರು ’ನಾನೂ ಒಬ್ಬ ಸಂಘದ ಅನೌಪಚಾರಿಕ ಸ್ವಯಂಸೇವಕನೇ’ ಎಂದಿದ್ದರು. ಇನ್ನೊಬ್ಬ ಸರ್ವೋದಯದ ಕಾರ್ಯಕರ್ತರು ’ಆರ್.ಎಸ್.ಎಸ್ ಎಂದರೆ 'Ready for Selfless Service' ಎಂದು ಹೇಳಿದ್ದರು.
No comments:
Post a Comment