೧೯೪೭ರಲ್ಲಿ ಪಂಜಾಬಿನ ಜಗದೀಶಚಂದ್ರ ಎನ್ನುವ ಸ್ವಯಂಸೇವಕ ಹಡಗಿನಲ್ಲಿ ಕೆನ್ಯಾಗೆ ಹೊರಟಿದ್ದರು. ಸಂಜೆ ಆಗುತ್ತಾ ಶಾಖೆಯ ನೆನಪಾಯಿತು. ಅಗ ಅವರು ಹಡಗಿನ ಮೇಲೆ ಬಂದು ಪ್ರಾರ್ಥನೆ ಪ್ರಾರಂಬಿಸಿದರು. ಅದು ಮುಗಿಯುವ ಹೊತ್ತಿಗೆ ಮಾಣಿಕಚಂದ್ ಎನ್ನುವ ಇನ್ನೊಬ್ಬ ಸ್ವಯಂಸೇವಕ ಅವರ ಜೊತೆ ಸೇರಿದ್ದರು.
ನಂತರ ಕೆನ್ಯಾದ ಇತರ ಸ್ವಯಂಸೇವಕರನ್ನು ಮತ್ತು ಹಿಂದುಗಳನ್ನು ಸೇರಿಸಿ ೧೯೪೭ರ ಸಂಕ್ರಾಂತಿಯಂದು ಶಾಖೆ ಪ್ರಾರಂಭಿಸಿದರು. ೧೯೬೭ರಲ್ಲಿ ಇಂಗ್ಲೆಂಡಿನಲ್ಲಿ ಭಾರತೀಯ ಕಾಫೀ ಬೋರ್ಡಿನಿಂದ ಅಲ್ಲಿಗೆ ಹೋದ ಸತ್ಯನಾರಾಯಣ ರಾವ್ ಅಲ್ಲಿ ಶಾಖೆ ಪ್ರಾರಂಭಿಸಿದರು.
ಹೀಗೆ ವಿದೇಶದಲ್ಲಿ ಅನೇಕ ಹೆಸರಿನಲ್ಲಿ ಸಂಘ ಕಾರ್ಯವು ಪ್ರಾರಂಭವಾಯಿತು. ಮಾರಿಷಸ್ ಸ್ವಯಂಸೇವಕ ಸಂಘ, ಭಾರತೀಯ ಸ್ವಯಂಸೇವಕ ಸಂಘ, ಹಿಂದು ಸ್ವಯಂಸೇವಕ ಸಂಘ ಮುಂತಾದ ಹೆಸರುಗಳಿಂದ ಸಂಘಟನೆಯ ಕೆಲಸ ಪ್ರಾರಂಭವಾಯಿತು. ಸುಮಾರು ೩೨ ದೇಶಗಳಲ್ಲಿ ೫೨೮ಕ್ಕೂ ಹೆಚ್ಚು ಶಾಖೆಗಳು ನಡೆಯುತ್ತಿವೆ.
ಅಮೆರಿಕಾದ ಬುಶ್ ಸರಕಾರ ಪಾಕಿಸ್ಥಾನಕ್ಕೆ F16 ಯುದ್ಧ ವಿಮಾನವನ್ನು ಮಾರುವ ನಿರ್ಧಾರ ತೆಗೆದುಕೊಂಡಾಗ, ಅಲ್ಲಿಯ ಹಿಂದೂ ಸ್ವಯಂಸೇವಕ ಸಂಘದ ಸ್ವಯಂಸೇವಕರು ಆ ನಿರ್ಧಾರವನ್ನು ವಿರೋಧಿಸಿ ಅಲ್ಲಿನ ಸರಕಾರಕ್ಕೆ ಪತ್ರ, ಫಾಕ್ಸ್ ಮುಖೇನ ಒತ್ತಡ ಹಾಕಿದರು. ಆ ಕಾರಣ ಅಮೇರಿಕಾ ಸರಕಾರವು ಆ ನಿರ್ಧಾರವನ್ನು ತಡೆಹಿಡಿದು, ಯುದ್ಧ ವಿಮಾನವನ್ನು ಮಾರವುದನ್ನು ಮುಂದೂಡಿತು.
No comments:
Post a Comment