Thursday, 22 June 2017

ಪರಿವರ್ತನೆ



   ನಾಲ್ವಡಿ ಕೃಷ್ಣರಾಜ ಓಡೆಯರ್ ಒಮ್ಮೆ ಪ್ರವಾಸದಿಂದ ಹಿಂದಿರುಗುತ್ತಿರುವಾಗ ಒಂದು ವನವಾಸಿಗಳ ಗ್ರಾಮಕ್ಕೆ ಹೋದರು. ಅಲ್ಲಿನ ಜನರ ಹೀನ ಪರಿಸ್ಥಿತಿಯನ್ನು ನೋಡಿ ಅಲ್ಲಿ ಒಂದು ವಸತಿಗೃಹ ಹಾಗೂ ಶಾಲೆ ತೆರೆಯಲು ನಿರ್ಧಾರ ಮಾಡಿದರು. ಮೈಸೂರಿಗೆ ಮರಳಿದ ನಂತರ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಅವಶ್ಯಕವಾದ ವ್ಯವಸ್ಥೆಗೆ ಆದೇಶ ಮಾಡಿದರು. ಅಲ್ಲಿನ ಶಾಲೆಗೆ ಒಬ್ಬ ಪಂಡಿತರನ್ನೂ ಕಳಿಸಿದರು. ಆ ಪಂಡಿತರ ಹೆಸರು ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಎಂದು.

    ಕೆಲವು ವರ್ಷಗಳ ನಂತರ ಮಹಾರಾಜರು ಅದೇ ದಾರಿಯಲ್ಲಿ ಬರುವ ಅವಕಾಶವಾಯಿತು. ಹಿಂದಿನ ಸಂಗತಿಗಳನ್ನು ನೆನಪಿಸಿಕೊಂಡು ಮತ್ತೆ ಅದೇ ಗ್ರಾಮಕ್ಕೆ ಹೋದರು. ಆದರೆ ಅವರ ಆಶ್ಚರ್ಯಕ್ಕೆ ಅಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಜನರ ಮತ್ತು ಗ್ರಾಮದ ಪರಿಸ್ಥಿತಿ ಹಿಂದಿನಂತೆಯೇ ಇತ್ತು.

    ಮಹಾರಾಜರನ್ನು ನೋಡಲು ಹಳ್ಳಿಯ ಒಂದು ದೊಡ್ಡ ಗುಂಪೇ ಸೇರಿತು. ತಾವು ಕಳಿಸಿದ್ದ ಶಾಸ್ತ್ರಿಗಳ ನೆನಪಾಗಿ ಆ ಗುಂಪಿನಲ್ಲಿ ಶಾಸ್ತ್ರಿಗಳನ್ನು ಹುಡುಕಲು ಪ್ರಯತ್ನಿಸಿದರು. ಶಾಸ್ತ್ರಿಗಳು ಕಾಣದಿದ್ದಾಗ ಅವರನ್ನು ಕರೆತರಲು ಮಹರಾಜರು ಹೇಳಿದರು. ತಕ್ಷಣವೇ ಆ ಗುಂಪಿನಿಂದ ಒಂದು ಧ್ವನಿ ಬಂದಿತು "ನಾನೇ ಚಾಮಿ ಕುಕ್ಕೆ ಚುಬ್ಬ".

    ಬದಲಾವಣೆಯನ್ನು ತರಬೇಕಾಗಿದ್ದ ಶಾಸ್ತ್ರಿಗಳೇ ವನವಾಸಿಗಳ ರೀತಿ, ಭಾಷೆಗಳಿಗೆ ಬದಲಾಗಿ ಬಿಟ್ಟಿದ್ದರು.

No comments:

Post a Comment